ಶ್ರೀ ಹನುನುಂತದೇವರ ದಂಡಕ

ಹನುಮಂತ ಭೂಪಾ
ಸದ್ಗುಣಮಣಿ ಶಾಂತರೂಪಾ || ಪ ||

ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರ
ಶುಭಕಿರಣ ವಿಹಾರನು ಮಹಿಮಾಗಾರಾ
ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ
ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕಾ ಕಪಿವರ ಕರುಣ ಕೃಪಾಳು ||೧||

ಹರಿ ರಾಮ ಚಾರಕಾ ನಿರುಪಮ ನಿರಹಂಕರ ಕರಾ ಸಂಚಾರ
ಚರಿತ ಭೂಪರಾ ಬಹುಭರದಿ ಲಂಕಾಪುರಕೆ ಕಪಿಗಳ
ನೆರಪಿ ವಿಸ್ತರಾ ರಾವಣಸುರಾನುರುಹಿದಾ ದೀರಾ
ಕುಂಭಕರ್ಣರಾ ತಾಟಕಿಯ ಭರಾ ದೂಷಣ
ಖರಾದಿಗಳ ಸಂಹರಾ ಪರಾಕ್ರಮ ವೀರಾ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ||೨||

ಜಿತೇಂದ್ರಿಯ ಜಯ ಶುಭಮತೀ ಜಲಸ್ತಟ
ಪಥಾಸಾರಿ ನಿರ್ಮಿತಾ ನಿರಂತರ
ಹತಾಶ ದಾನವ ಪತೀಂದ್ರಜಿತುವಿನ ಮಥನ ಮೂರುತಿ ನತಾ
ವಿಭೀಷಣ ಗತಿಮುಕ್ತಿಯಾ ಪಥ ವಾಯಕಾ ಹಿತಾ ಸಾಯಕಾ
ವೃತಸ್ತಂಭನಾ ಅತೀತ ಮೂರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ |!೩||

ಭಲಾವಂತ ಬಾಲಕಾ ರಾಮ ಭೂಪಾಲ ರಘುಸುತ
ಸಲುಹಿ ಸಮರದಿ ಕಲಿ ಲಕ್ಷ್ಮಣನಿಗೊಲಿದು ಜೀವನ
ಫಲಾಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಾಗೆಲಿಸಿ ಜಾನಕಿಯ ರಾಮ ಪದಕೊಲಿಸಿ ನಿಜ
ಲೀಲಾ ಮೂರುತಿ ಭಲೆ ಬ್ರಹ್ಮಋಷಿ ಕುಲೊತ್ತಮಂ ಭಜೇ
ಬಾಲದಂಡ ಬಲಭೀಮದಯಾಳು ||೪||

ಮಂಡಲೀಶ ಕೋದಂಡ ಹರೀವರ ಪಾಂಡುತನಯ
ಗಾಂಡಿವಿರಥಾಗ್ರದಿ ಕಂಡು ಪತಾಕಿನಿ
ಕುಂಡಲಿಯೋಳ್ ನಿನ್ನ ಅಂಡಲಿಯಲು ಕುರುಸೈನ್ಯ ಕಲಹದೋಳ್
ದಿಂಡುಗೆಡಹಿ ಬ್ರಹ್ಮಾಂಡಕಿಳಿದು ಬಹು ಪುಂಡಗ್ರಾಮ ಅತಿಗೇರಿ ಸ್ಥಳದಿ ಪ್ರ-
ಚಂಡ ವೀರ ಹನುಮಂತ ಪ್ರಭೋ
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋಯೆಂಬೆನೈ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಬಸವೇಶ್ವರ ದಂಡಕ
Next post ಅಮಾವಾಸ್ಯೆಯ ದಿವಸ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys